ಚಡಚಣ:ಪಟ್ಟಣದ ವಿದ್ಯಾ ಕಲ್ಯಾಣಶೆಟ್ಟಿ ಅವರು ರಾಜ್ಯ ಮಟ್ಟದ ಬಸವ ಚೇತನ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ ಎಂದು ಅಮ್ಮ ಫೌಂಡೆಷನ ಸಂಚಾಲಕರಾದ ಕಬೂಲ್ ಕೊಕಟನೂರ ಮತ್ತು ಕಾರ್ಯದರ್ಶಿಗಳಾದ ಎಚ್ ಆರ್ ಕೊಕಟನೂರ ಪ್ರಕಟಿಸಿದ್ದಾರೆ.
ವಿದ್ಯಾ ಕಲ್ಯಾಣಶೆಟ್ಟಿ ಅವರು ಚಡಚಣ ತಾಲೂಕಿನಲ್ಲಿ ಸಮೃದ್ಧಿ ಮಹಿಳಾ ಸೇವಾ ಸಂಸ್ಥೆಯನ್ನು ಕಟ್ಟಿ ಅನೇಕ ಮಹಿಳಾ ಪರ ಕಾರ್ಯಗಳನ್ನು ಮಾಡಿ ನೊಂದ ಮಹಿಳೆಯರಿಗೆ ದಾರಿ ದೀಪವಾಗಿದ್ದಾರೆಂದು ಅವರ ಈ ಸೇವೆಯನ್ನು ಪರಿಗಣಿಸಿ ನಮ್ಮ ಸಂಸ್ಥೆಯು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






